ಹೆಬ್ರಿ : ಹೆಬ್ರಿ ಪೊಲೀಸ್ ಠಾಣೆ ರಸ್ತೆಗೆ ಶುಕ್ರವಾರ ದಾರಿ ದೀಪವನ್ನು ಅಳವಡಿಸಲಾಗಿದೆ.
ಕಾಡಂಚಿನಲ್ಲಿ ಹೆಬ್ರಿ ಪೋಲಿಸ್ ಠಾಣೆ, ಪೊಲೀಸ್ ಸ್ಟೇಷನ್ ರಸ್ತೆಯ ದುಸ್ಥಿತಿ ಹಾಗೂ ದಾರಿ ದೀಪ ಇಲ್ಲದ ಠಾಣೆಯ ರಸ್ತೆಯ ಬಗ್ಗೆ ನಿರಂತರವಾಗಿ ಮಾಧ್ಯಮಗಳ ವರದಿ ಮತ್ತು ಸಾಮಾಜಿಕ ಹೋರಾಟಗಾರ ಕುಚ್ಚೂರು ಶ್ರೀಕಾಂತ್ ಪೂಜಾರಿ ಅವರು ನಿರಂತರವಾಗಿ ನಡೆಸಿದ ಹಿನ್ನಲೆಯಲ್ಲಿ ದಾರಿ ದೀಪವನ್ನು ಶುಕ್ರವಾರ ಅಳವಡಿಸಲಾಗಿದೆ.
ಸದ್ಯದ ಮಟ್ಟಿಗೆ ದಾರಿದೀಪವನ್ನು ಅಳವಡಿಸಿದ್ದಾರೆ ಇನ್ನು ಸರಿಯಾದ ರಸ್ತೆ ಹಾಗೂ ಉಪ ಪೊಲೀಸ್ ಠಾಣೆ ಹೆಬ್ರಿ ಪೇಟೆಯಲ್ಲಿ ಸ್ಥಾಪಿಸಬೇಕೆಂದು ಜೆಡಿಎಸ್ ಕಾರ್ಕಳ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದ್ದಾರೆ.




