ಹೆಬ್ರಿ : ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ಮುದ್ರಾಡಿ ಎಂಎನ್ ಡಿಎಸ್ಎಂ ಅನುದಾನಿತ ಪ್ರೌಢ ಶಾಲೆಯ ಬಳಿ ಮಂಗಳವಾರ ಬೆಳಿಗ್ಗೆ ಸುರಿದ ಭಾರಿ ಗಾಳಿ ಮಳೆಗೆ ಭಾರಿ ಗಾತ್ರದ ಮರ ಮಾರ್ಗದಕ್ಕೆ ಬಿದ್ದು ಕೆಲಕಾಲ ಸಂಚಾರ ಬಂದ್ ಆಗಿದೆ.
ವಾಹನಗಳು ಮುದ್ರಾಡಿ ಸೋಮೇಶ್ವರ ರಸ್ತೆಯಲ್ಲಿ ಬಚ್ಚಪ್ಪು ಮೂಲಕ ಹೆಬ್ರಿ ಕಡೆಗೆ ಹೋಗಬೇಕಾಯಿತು. ಮುದ್ರಾಡಿಯ ಸ್ಥಳೀಯರು, ಸಮಾಜಸೇವಕರು ಸೇರಿ ಮುದ್ರಾಡಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯ ಸಹಕಾರದಲ್ಲಿ ಶೀಘ್ರವಾಗಿ ಮರವನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಮುಖ್ಯ ರಸ್ತೆಯಾದರೂ ಯಾವೂದೇ ಹಾನಿಯಾಗದೆ ಅಪಾಯದಿಂದ ಪಾರಾಗಿದ್ದಾರೆ. ವಿದ್ಯುತ್ ಲೈನ್ ಗಳಿಗೆ ಮರದ ಕೊಂಬೆಗಳು ಬಿದ್ದು ಹಾನಿ ಆಗಿದೆ.


