ಹೆಬ್ರಿ : ಇತ್ತೀಚಿನ ದಿನಗಳಲ್ಲಿ ಹೆಬ್ರಿ ಸಹಿತ ಉಡುಪಿ ಜಿಲ್ಲೆಯ ವಿವಿದೆಡೆ ಹೆಚ್ಚಾಗಿ ಕೋಟ್ಯಂತರ ವೆಚ್ಚದ ಯೋಜನೆ ತ್ಯಾಜ್ಯ ಘಟಕಗಳನ್ನು ಗುರಿಯಾಗಿಸಿ ಬೆಂಕಿ ಹಾಕಿ ಸಾಕ್ಷಿಗಳನ್ನು ನಾಶ ಮಾಡುತ್ತಿರುವುದು ಕಂಡು ಬರುತ್ತಿದೆ.
ಇದರ ಹಿಂದೆ ಬಹಳಷ್ಟು ಅಧಿಕಾರಿಗಳ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕೈವಾಡ ಇರಬಹುದೇ ಎಂಬ ಸಂಶಯ ಬರುತ್ತಿದೆ. ಶುಕ್ರವಾರ ಕಾರ್ಕಳದ ಪುರಸಭಾ ತ್ಯಾಜ್ಯ ಘಟಕದಲ್ಲೂ ಬೆಂಕಿ ತಗುಲಿರುವುದು ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ. ಎಂದು ಶ್ರೀಕಾಂತ್ ಪೂಜಾರಿ ಕುಚ್ಚೂರು, ಸಾಮಾಜಿಕ ಹೋರಾಟಗಾರರು, ಹೆಬ್ರಿ ಹೇಳಿದ್ದಾರೆ.


