ಹೆಬ್ರಿ:ಕಾರಿನ ಮೇಲೆ ಮರ ಬಿದ್ದು ವ್ಯಕ್ತಿ ಕಾರಿನ ಒಳಗೆ ಮೃತ್ಯು.
ಹೆಬ್ರಿ : ಹೆಬ್ರಿಯ ಬ್ರಹ್ಮಾವರ ರಸ್ತೆಯಿಂದ ಹೆಬ್ರಿಯ ಕಡೆಗೆ ಬರುವಾಗ ಬ್ರಹ್ಮಾವರ ರಸ್ತೆ ಮೂರುರಸ್ತೆ ಹುತ್ತುರ್ಕೆ ಬಳಿ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರಿನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಮೃತ ಪಟ್ಟ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.ಮೃತಪಟ್ಟವರನ್ನು ಕಳ್ತೂರು ಗ್ರಾಮದ ದರ್ಖಾಸು ಮನೆ ನಿವಾಸಿ ಸದಾನಂದ ನಾಯಕ್ ಎಂದು ಗುರುತಿಸಲಾಗಿದೆ.
ಕೆಲವೇ ದಿನಗಳ ಹಿಂದೇ ಅದೇ ಪರಿಸರದಲ್ಲಿ ರಸ್ತೆ ಮೇಲೆ ಮರ ಬಿದ್ದು ಯುವತಿ ಅಪಾಯದಿಂದ ಪಾರಾಗಿದ್ದರು.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.ಸದಾನಂದ ನಾಯಕ್ ಅವರು ಬಸ್ ಗೆ ಪಾರ್ಸೆಲ್ ಹಾಕಲು ಬರುವಾಗ ಘಟನೆ ನಡೆದಿದೆ. ಕಾರಿನ ಒಳಗೆ ಇದ್ದ ಮೃತದೇಹವನ್ನುಹೊರತೆಗೆಯಲಾಗಿದೆ.
ಹೆಬ್ರಿ ಬ್ರಹ್ನಾವರ ರಸ್ತೆ ಸಂಚಾರ ಬಂದ್ ಆಗಿದ್ದುಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದಾರೆ.



