ಭೂಮಿಯ ಒಡೆಯ ನಾಗರಾಜನನ್ನು ಇಂದು ನಾಗರ ಪಂಚಮಿಯ ವಿಶೇಷದಂದು ಆರಾಧಿಸಲಾಯಿತು.
ಮನೆಮನೆಗಳ ನಾಗಬನ, ಬ್ರಹ್ಮಸ್ಥಾನಗಳಲ್ಲಿ, ದೇವಸ್ಥಾನಗಳ ನಾಗಾಬನದಲ್ಲಿ ನಾಗಾರಾಧನೆ ಭಕ್ತಿ ವೈಭವದಿಂದ ನಡೆಯಿತು. ಶಿವಪುರ ಕೆಳಖಜಾನೆ ಆಶ್ರಯದ ನಾಗಬನದಲ್ಲಿ ನಾಗರ ಪಂಚಮಿ ನಡೆಯಿತು. ವೇದಮೂರ್ತಿ ನಾಯರಕೋಡು ಶಿವಾನಂದ ತಂತ್ರಿಯವರು ನಾಗಪಂಚಮಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.



