ಹೆಬ್ರಿ ನ್ಯೂಸ್
ಹೆಬ್ರಿ : ರಂಗ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಅವರ ಚೈತನ್ಯ ಕಲಾವಿದರು ತಂಡದ ಈ ವರ್ಷದ ಯಶಸ್ವಿ ನಾಟಕ “ರಾಘು ಮಾಸ್ಟ್ರು” ಶತ ಪ್ರದರ್ಶನ ಕಂಡಿದ್ದು 60 ನೇ ಪ್ರದರ್ಶನದ ಪ್ರಾಯೋಜಕತ್ವದವನ್ನು ನೀಡಿದ ಹೆಬ್ರಿಯ ಚೈತನ್ಯ ಯುವ ವೃಂದದ ಸದಸ್ಯರನ್ನು ಇತ್ತೀಚೆಗೆ ಪ್ರಸನ್ನ ಶೆಟ್ಟಿ ಬೈಲೂರು ಗೌರವಿಸಿದರು.
ಇದೇ ಸಂದರ್ಭದಲ್ಲಿ ರಂಗ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಅವರನ್ನು ಹೆಬ್ರಿ ಚೈತನ್ಯ ಯುವ ವೃಂದದಿಂದ ಗೌರವಾರ್ಪಣೆ ನೀಡಲಾಯಿತು. ಹೆಬ್ರಿ ಚೈತನ್ಯ ಯುವ ವೃಂದದ ಪ್ರಧಾನ ಕಾರ್ಯದರ್ಶಿ ರಾಜೇಶ ಆಚಾರ್ಯ ಮಠದಬೆಟ್ಟು, ಗೌರವಾಧ್ಯಕ್ಷ ಎಚ್. ಜನಾರ್ಧನ್, ಪ್ರಸಾದ್ ಶೆಟ್ಟಿ, ಪ್ರಕಾಶ ಶೆಟ್ಟಿ, ನರೇಶ ಭಂಡಾರಿ, ಚೈತನ್ಯ ಯುವ ವೃಂದದ ಸದಸ್ಯರು, ಚೈತನ್ಯ ಕಲಾವಿದರು ತಂಡದ ಸದಸ್ಯರು ಉಪಸ್ಥಿತರಿದ್ದರು.


