ಹೆಬ್ರಿ : ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘದ ವತಿಯಿಂದ ಭಾನುವಾರ ಸೀತಾನದಿ ದುಡ್ಡಿನಜಡ್ಡು ಅಕ್ಕಮ್ಮನ ಗದ್ದೆ ಮತ್ತು ಶಂಕರಿಯ ಗದ್ದೆಯಲ್ಲಿ ಆಟಿಡೊಂಜಿ ಕೂಟೊಡು ಕೆಸರ್ದ ಗೊಬ್ಬು ನಡೆಯಿತು.
ವಿಶ್ವ ತುಳುವ ಮಹಾಸಭಾ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡ ಕೊಕ್ರಾಡಿ ಉದ್ಘಾಟಿಸಿ ಶುಭಹಾರೈಸಿದರು. ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘದ ಪ್ರವೀಣ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಮೂಡಬಿದರೆಯ ಅಧ್ಯಕ್ಷ ಪ್ರಭಾಕರ ಹೆಗ್ಡೆ, ಉದ್ಯಮಿ ವಿಶ್ವನಾಥ ಹೆಗ್ಡೆ, ಹೆಗ್ಗಡೆ ಸಮಾಜ ಬೆಂಗಳೂರಿನ ಕಟ್ಟಡ ಸಮಿತಿಯ ಕಾರ್ಯದರ್ಶಿ ಸದಾಶಿವ ಹೆಗ್ಡೆ ಕೊಳಂಬೆ, ಕಾರ್ಕಳ ರೋಟರಿ ರಾಕ್ ಸಿಟಿ ಅಧ್ಯಕ್ಷ ಮಂಜುನಾಥ ಹೆಗ್ಡೆ ಹೆರ್ಮುಂಡೆ, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ ದೊಂಡೆರಂಗಡಿ, ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ, ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘದ ಗೌರವಾಧ್ಯಕ್ಷ ಸುಧಾಕರ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ಎಸ್ ಹೆಗ್ಡೆ, ತಿಂಗಳೆ ದರ್ಕಾಸು ಮನೆ ಗುಲಾಬಿ ವಿಠ್ಠಲ ಹೆಗ್ಡೆ, ಹಿರಿಯರಾದ ಚಂದುಕುಂದು ಸುಬ್ಬಣ್ಣ ಹೆಗ್ಡೆ, ಹೆಬ್ರಿ ವಲಯ ಹೆಗ್ಗಡೆ ಸಮಾಜ ಸಂಘದ ಸುನೀತಾ ಅರುಣ್ ಕುಮಾರ್ ಹೆಗ್ಡೆ, ಸಂಘದ ಪದಾಧಿಕಾರಿಗಳು, ಸರ್ವಸದಸ್ಯರು ಉಪಸ್ಥಿತರಿದ್ದರು. ಉತ್ತಮ ಕೃಷಿ ಪ್ರಶಸ್ತಿ ಪುರಸ್ಕೃತರಾದ ಯಶೋದ ಬಿ. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಮತ್ತು ಟ್ರೋಫಿ ನೀಡಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ಪ್ರನೀಲ್ ಹೆಗ್ಡೆ ಮಾಡಿದರು. ಮಾಜಿ ಕಾರ್ಯದರ್ಶಿ ಹರಿದಾಸ ಹೆಗ್ಡೆ ವಂದಿಸಿದರು. ಪ್ರವೀಣ್ ಹೆಗ್ಡೆ ಸ್ವಾಗತಿಸಿದರು. ಅನಿತಾ ಜಯಪಾಲ ಹೆಗ್ಡೆ ನಿರೂಪಿಸಿದರು




