ಪೆರ್ಡೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೆರ್ಡೂರಿನ ಕಟ್ಟೆ ಪ್ರೆಂಡ್ಸ್ ಕೈೊತ್ಯಾರು ತಂಡದ 17ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಯ ಕಾರ್ಯಕ್ರಮ ನಡೆಯಿತು.
ಮುದ್ರಾಡಿ ನೆಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯ ಮುಖ್ಯೋಪಾಧ್ಯಾಯ ರವೀಂದ್ರ ಹೆಗ್ಡೆ ಪಾಡಿಗಾರ್ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ರವೀಂದ್ರ ಹೆಗ್ಡೆಯವರನ್ನು ಗೌರವಿಸಲಾಯಿತು. ಸ್ವಾತಂತ್ರ್ಯ ಪೂರ್ವದ ಇತಿಹಾಸ, ಧ್ವಜಾರೋಹಣದ ಮಹತ್ವವನ್ನು ರವೀಂದ್ರ ಹೆಗ್ಡೆ ತಿಳಿಸಿದರು. ರಂಗಕರ್ಮಿ ರತ್ನಾಕರ ಶೆಟ್ಟಿ, ಕುಶಲಕರ್ಮಿ ಭಾಸ್ಕರ ಆಚಾರ್ಯ, ಗೌರವಾಧ್ಯಕ್ಷ ರವಿರಾಜ್ ಆಚಾರ್ಯ, ಅಧ್ಯಕ್ಷ ಸಂದೇಶ್ ಪ್ರಭು ಮತ್ತು ಮಹಿಳಾ ಪ್ರಮುಖರು ಭಾಗವಹಿಸಿದ್ದರು.
ತಂಡದ ಸದಸ್ಯ ಸಂಪತ್ ಸ್ವಾಗತಿಸಿದರು, ಕಾರ್ಯದರ್ಶಿ ಸ್ವರೂಪ್ ನಿರೂಪಿಸಿದರು, ರೋಹಿತ್ ವಂದಿಸಿದರು.



