ಹಾಸನ ಅರೆಮಾದನಹಳ್ಳಿ : ಹಾಸನ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಜಗದ್ಗುರು ಅನಂತಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿ ಚಾತುರ್ಮಾಸ್ಯ ಮತ್ತು ಅವರ ಶಿಷ್ಯ ಶ್ರೀ ಜ್ಞಾನ ಘನ ತೀರ್ಥ ಮಹಾಸ್ವಾಮಿಗಳವರ ಪ್ರಥಮ ಚಾತುರ್ಮಾಸ್ಯ ವೃತಾಚರಣೆಯು ಹಾಸನ ಅರೆಮಾದನಹಳ್ಳಿ
ವಿಶ್ವಕರ್ಮ ಜಗದ್ಗುರು ಪೀಠ, ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಆರಂಭಗೊಂಡಿತು.
ಇದೇ ಸುಸಂದರ್ಭದಲ್ಲಿ ಗುರುಪೂರ್ಣಿಮೆಯ ಪೂಜಾ ಕಾರ್ಯಕ್ರಮ ಗುರುಧ್ವಯರ ದಿವ್ಯ ಸಾನಿಧ್ಯದಲ್ಲಿ ನಡೆಯಿತು. ರಾಜ್ಯದ ನೂರಾರು ಭಕ್ತರು ಭಾಗಿಯಾದರು.



