ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇದ್ದರೂ
ಸೌಲಭ್ಯಗಳ ಕೊರತೆ..!
ಹೆಬ್ರಿ : ಸುಸಜ್ಜಿತವಾದ ಆಸ್ಪತ್ರೆಯ ಕಟ್ಟಡ, ಸಕಲ ವ್ಯವಸ್ಥೆ ಇದ್ದರೂ
ರೋಗಿಗಳು ಬಂದರೆ ಸೌಲಭ್ಯಗಳ ಕೊರತೆಯಿಂದ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ.
ಸಾರ್ವಜನಿಕರಿಗೆ ತುರ್ತು ಸೇವೆಗೆ ಬೇಕಾದ ಸ್ಕ್ಯಾನಿಂಗ್ ಸೆಂಟರ್ ಇಲ್ಲ,
ಎಕ್ಸರೇ ಯಂತ್ರ ಇದ್ದರೂ ಸೌಲಭ್ಯವಿಲ್ಲ,ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಬ್ರಿ ಸಮುದಾಯ ಆಸ್ಪತ್ರೆಗೆ ಬೇಕಾದ ಮೂಲ ಸೌಕರ್ಯಗಳನ್ನು ಬಡ ಜನರಿಗೆ ಕೂಡಲೇ ಉತ್ತಮ ಚಿಕಿತ್ಸೆ ಸಿಗುವ ರೀತಿಯಲ್ಲಿ ಸೌಲಭ್ಯಗಳನ್ನು ವ್ಯವಸ್ಥೆ ಮಾಡುವಂತೆ ಸಾಮಾಜಿಕ ಹೋರಾಟಗಾರರಾದ ಜೆಡಿಎಸ್ ಕಾರ್ಕಳ ಕ್ಷೇತ್ರಾಧ್ಯಕ್ಷ ಕುಚ್ಚೂರು ಶ್ರೀಕಾಂತ್ ಪೂಜಾರಿ ಒತ್ತಾಯಿಸಿದ್ದಾರೆ.


