ಹೆಬ್ರಿ : ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನಕ್ಕೆ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಂಗಳವಾರ ಬೇಟಿ ನೀಡಿದರು. ದೇವಸ್ಥಾನದ ಆಡಳಿತ ಮೋಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್ ಶಾಸಕರನ್ನು ಸ್ವಾಗತಿಸಿದರು. ಬಳಿಕ ಪೂಜೆ ಸಲ್ಲಿಸಿ ದೇವಸ್ಥಾನದ ವತಿಯಿಂದ ಶಾಸಕ ಸುನೀಲ್ ಕುಮಾರ್ ಅವರನ್ನು ಪ್ರಸಾದದ ಜೊತೆಗೆ ಗೌರವಿಸಲಾಯಿತು.
ದೇವಸ್ಥಾನದ ಆಡಳಿತ ಮೋಕ್ತೇಸರ ಹೆಬ್ರಿ ತಾರಾನಾಥ ಬಲ್ಲಾಳ್, ಹೆಬ್ರಿಯ ಮುಖಂಡ ಭಾಸ್ಕರ ಜೋಯಿಸ್, ಹೆಬ್ರಿ ಬಾಲಕೃಷ್ಣ ನಾಯಕ್, ಅರ್ಚಕ ವರ್ಗದವರು, ಹೆಬ್ರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯಕ್, ವಿವಿಧ ಪ್ರಮುಖರಾದ ರಾಮಕೃಷ್ಣ ಆಚಾರ್ಯ ಹೆಬ್ರಿ , ಜ್ಯೋತಿ ಹರೀಶ್ ಮುನಿಯಾಲ್, ಶಿವಪುರ ಸುರೇಶ ಶೆಟ್ಟಿ, ರಮೇಶ ಕುಮಾರ್ ಶಿವಪುರ, ಸನತ್ ಕುಮಾರ್ ಮುದ್ರಾಡಿ, ಸಂತೋಷ್ ಶೆಟ್ಟಿ ಮುದ್ರಾಡಿ ಉಪ್ಪಳ, ಸಮೃದ್ಧಿ ಪ್ರಕಾಶ ಶೆಟ್ಟಿ, ಸುರೇಂದ್ರ ಶೆಟ್ಟಿ ಮುನಿಯಾಲು, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ನಿತ್ಯಾನಂದ ಶೆಟ್ಟಿ ಕುಚ್ಚೂರು, ಕೃಷ್ಣ ನಾಯ್ಕ್ ಚಾರ, ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಗಣೇಶ್ ಕುಮಾರ್ ಹೆಬ್ರಿ, ಅರುಣ್ ಕುಮಾರ್ ಶೆಟ್ಟಿ ಕನ್ಯಾನ, ಭೋಜ ಪೂಜಾರಿ ಬೈದರಬೆಟ್ಟು, ಹೆಚ್.ಕೆ.ಸುಧಾಕರ್, ಸುಧಾಕರ ಹೆಗ್ಡೆ, ಗಣೇಶ ಕುಲಾಲ್, ನಾಡ್ಪಾಲು ದಿನೇಶ ಹೆಗ್ಡೆ, ಅಮೃತ್ ಕುಮಾರ್ ಶೆಟ್ಟಿ, ಹೆಬ್ರಿ ತಾರಾನಾಥ ಬಂಗೇರ ಸೇರಿದಂತೆ ವಿವಿಧ ಗ್ರಾಮಗಳ ಬಿಜೆಪಿ ಪ್ರಮುಖರು, ಮುಖಂಡರು ಹಾಜರಿದ್ದರು.


