ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಸೋಮೇಶ್ವರ ಸೀತಾನದಿಯ ಬೆಳಾರ್ ಹುಸೇನ್ ಸಾಹೇಬ್ ಅವರ ದನದ ಕೊಟ್ಟಿಗೆಗೆ ಚಿರತೆ ನುಗ್ಗಿದ್ದು ಚಿರತೆ ದಾಳಿಯಿಂದ ಕರು ಸಾವನ್ನಪ್ಪಿದೆ.
ಹೆಬ್ರಿ ತಾಲ್ಲೂಕಿನ ವಿವಿದೆಡೆ ಚಿರತೆ ದಾಳಿಗಳು ಹೆಚ್ಚುತ್ತಿದೆ. ಜನ ಆತಂಕಗೊಂಡಿದ್ದಾರೆ.
ಈ ಹಿಂದೆ ಕೂಡ ಚಿರತೆ ದಾಳಿಯಿಂದ ಹುಸೇನ್ ಸಾಹೇಬ್ ಅವರ 4 ದನಗಳು ಮೃತಪಟ್ಟಿವೆ.
ಅರಣ್ಯ ಇಲಾಖೆಯ ಸೂಕ್ತ ಕ್ರಮ ಕೈಗೊಂಡು ನಷ್ಟವನ್ನು ಅರಣ್ಯ ಇಲಾಖೆ ಭರಿಸಿ ಪರಿಹಾರ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.


