ಮುದ್ರಾಡಿ ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಮಹಾ ಚಂಡಿಕಾಯಾಗ.
ನೂರಾರು ಭಕ್ತರು ಭಾಗಿ….
ಮುದ್ರಾಡಿ : ಶ್ರೀ ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರ ಮುದ್ರಾಡಿ ಶ್ರೀ ನಂದಿಕೇಶ್ವರ ಶ್ರೀ ಕ್ಷೇತ್ರ ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿ ನಾಟ್ಕದೂರು ಮುದ್ರಾಡಿಯಲ್ಲಿ ಗುರು ಪೂರ್ಣಿಮೆಯ ಶುಭದಿನ ಬುಧವಾರ ಮಹಾ ಚಂಡಿಕಾ ಯಾಗವು ಭಕ್ತಿ ವೈಭವದಿಂದ ನೆರವೇರಿತು.
ನೂರಾರು ಭಕ್ತರು ಮಹಾ ಚಂಡಿಕಾ ಯುಗದಲ್ಲಿ ಭಾಗಿಯಾದರು.
ಕ್ಷೇತ್ರದ ಧರ್ಮಾಧಿಕಾರಿ ವಿಜಯಕೀರ್ತಿ ಧರ್ಮಯೋಗಿ ಸುಕುಮಾರ್ ಮೋಹನ್, ಭಕ್ತರು , ವಿವಿಧ ಗಣ್ಯರು ಭಾಗವಹಿಸಿದ್ದರು.
ಪ್ರತಿ ತಿಂಗಳ ಹುಣ್ಣಿಮೆಯಂದು ಮಹಾ ಚಂಡಿಕಾ ಯಾಗವು ಶ್ರೀ ಕ್ಷೇತ್ರ ಮುದ್ರಾಡಿಯಲ್ಲಿ ನಡೆಯುತ್ತದೆ ಧರ್ಮಯೋಗಿ ಸುಕುಮಾರ್ ಮೋಹನ್ ತಿಳಿಸಿದ್ದಾರೆ.


