Saturday, August 8, 2026
Homeಚಾರ ಗ್ರಾಮ ಪಂಚಾಯತ್‌ಚಾರ ಹಂದಿಕಲ್ಲು : ಚಿರತೆ ದಾಳಿ : ದನ ಸಾವು.

ಚಾರ ಹಂದಿಕಲ್ಲು : ಚಿರತೆ ದಾಳಿ : ದನ ಸಾವು.

ನಾಯಿ ಮರಿಗಳನ್ನು ಎತ್ತಿಕೊಂಡು ಹೋದ ಚಿರತೆ !

ಚಾರ : ಹೆಬ್ರಿ ತಾಲ್ಲೂಕು ಚಾರ ಪಂಚಾಯಿತಿ ವ್ಯಾಪ್ತಿಯ ಹಂದಿಕಲ್ಲು ರಸ್ತೆಯ ಮಣಿಬಚ್ಚಲು ಭುಜಂಗ ಶೆಟ್ಟಿಯವರ ಮನೆಯ ದನದ ಕೊಟ್ಟಿಗೆಗೆ ನುಗ್ಗಿ ಚಿರತೆ ದಾಳಿ ಮಾಡಿದೆ. ದಾಳಿಯ ವೇಳೆ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ದನ ಮೃತಪಟ್ಟಿದೆ. ನಾಯಿ ಮರಿಗಳನ್ನು ಎತ್ತುಕೊಂಡು ಹೋಗಿದೆ.

ಹೆಬ್ರಿ ತಾಲ್ಲೂಕಿನ ವಿವಿದೆಡೆ ನಿರಂತರವಾಗಿ ಚಿರತೆ ದಾಳಿ ನಡೆಯುತ್ತಿದ್ದು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಅರಣ್ಯ ಇಲಾಖೆಯವರು ವಿಶೇಷ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಪ್ರಗತಿಪರ ಹೋರಾಟಗಾರ ಮಿಥುನ್ ಶೆಟ್ಟಿ ಚಾರ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments