ಶಿವಪುರ : ನಮ್ಮೂರ ನಮ್ಮ ಕೆರೆ ಆಯ್ಕೆಗೆ ಸಂಬಂಧಿಸಿದಂತೆ, ಶಿವಪುರ ಗ್ರಾಮದ, ಬ್ರಹ್ಮ ಸ್ಥಾನ ಕೆರೆಯ ಹೂಳೆತ್ತುವಿಕೆ ಸಂಬಂಧಿಸಿದಂತೆ ಪೂರ್ವ ತಯಾರಿ ಸಭೆಯನ್ನು ಪಾಂಡು ಕಲ್ಲು ಶಂಕರ್ ಭಟ್ ಅವರ ಮನೆಯಲ್ಲಿ ನೆರವೇರಿಸಲಾಯಿತು.
ಹೆಬ್ರಿ ತಾಲೂಕಿನ ಯೋಜನಾಧಿಕಾರಿ ರೇಷ್ಮಾ ಅವರು ಕೆರೆ ಆಯ್ಕೆಗೆ ಸಂಬಂಧಿಸಿದಂತೆ, ಸಮಿತಿಯವರ ಜವಾಬ್ದಾರಿ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು
ಶಿವಪುರ ಕೆರೆ ಅಭಿವೃದ್ಧಿ
ಸಮಿತಿಯ ಅಧ್ಯಕ್ಷರಾಗಿ ಶಂಕರ್ ಬಡ್ಕಿಲ್ಲಾಯ, ಗೌರವಾಧ್ಯಕ್ಷರಾಗಿ ಮೋಹನ್ ದಾಸ್ ನಾಯಕ್, ಸಮಿತಿಯ ಇತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಜನಜಾಗೃತಿ ಸದಸ್ಯರು,ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಒಕ್ಕೂಟದ ಹಾಜರಿದ್ದರು.


