ಮುದ್ರಾಡಿ : ಮುದ್ರಾಡಿಯ ಪಾದೆಗುಡ್ಡೆ ಬಸ್ ಸ್ಟ್ಯಾಂಡ್ ಹತ್ತಿರ ಅಪಾಯಕಾರಿ ಒಣಗಿದ ಭೋಗಿ ಮರ ಮತ್ತು ಮುದ್ರಾಡಿಯ ಭೀಮನಗರ ಬಸ್ ಸ್ಟ್ಯಾಂಡ್ ಹತ್ತಿರ ರಸ್ತೆಯ ಬದಿಯ ಮಾವಿನ ಮರ ಅಪಾಯದ ಅಂಚಿನಲ್ಲಿದೆ.
ಶಾಲೆಗೆ ಹೋಗುವ ಮಕ್ಕಳು ಕೆಲಸಕ್ಕೆ ಹೋಗುವ ಮಹಿಳೆಯರು, ಹಿರಿಯ ನಾಗರಿಕರು, ಕೆಲಕಿಲ ಊರಿನ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರವನ್ನು ಆದಷ್ಟು ಬೇಗ ತೆರವುಗೊಳಿಸಲು ವಿನಂತಿಸಿದ್ದಾರೆ. ಮರಗಳ ತೆರವಿಗೆ ಸಾಮಾಜಿಕ ಕಾರ್ಯಕರ್ತ ಪ್ರೀತಮ್. ಜೆ. ಶೆಟ್ಟಿ ಹಾಡಿಮನೆ ಮುದ್ರಾಡಿ ಮನವಿ ಮಾಡಿದ್ದಾರೆ.



