Tuesday, August 11, 2026
Homeಹೆಬ್ರಿಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಬ್ರಿ ತಾಲ್ಲೂಕು ಶಾಖೆ ಸಭೆ: ಹೆಬ್ರಿ ತಾಲ್ಲೂಕು ನೂತನ ಪ್ರಧಾನ...

ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಬ್ರಿ ತಾಲ್ಲೂಕು ಶಾಖೆ ಸಭೆ: ಹೆಬ್ರಿ ತಾಲ್ಲೂಕು ನೂತನ ಪ್ರಧಾನ ಸಂಚಾಲಕರಾಗಿ ಚಂದ್ರಶೇಖರ್ ಹೆಬ್ರಿ ಆಯ್ಕೆ.

ಹೆಬ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ಹೆಬ್ರಿ ತಾಲ್ಲೂಕು ಶಾಖೆಯ ಸಭೆಯನ್ನು ಸೋಮವಾರ ಹೆಬ್ರಿ ಸಮಾಜ ಮಂದಿರದಲ್ಲಿ ನಡೆಯಿತು.

ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ಟರ್, ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್ ರಾಜ್ ಬಿರ್ತಿ, ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರ್, ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ಜಿಲ್ಲಾ ಸಂಘಟನಾ ಸಂಚಾಲಕ ಕೆ. ದೇವು ಉಪಸ್ಥಿತರಿದ್ದರು.

ಹೆಬ್ರಿ ತಾಲ್ಲೂಕಿನ ನೂತನ ಪ್ರಧಾನ ಸಂಚಾಲಕರನ್ನಾಗಿ ಚಂದ್ರಶೇಖರ್ ಹೆಬ್ರಿ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ತಾಲ್ಲೂಕು ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಶಾಖೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments