ಪಡುಕುಡೂರು: ಹೆಬ್ರಿ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಡುಕುಡೂರು ಶ್ರೀ ಭದ್ರಕಾಳಿ ಜ್ಞಾನ ವಿಕಾಸ ಕೇಂದ್ರದ ವತಿಯಿಂದ ಪಡುಕುಡೂರು ಶಾಲೆಯಲ್ಲಿ ಆಟಿಯ ರುಚಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
28 ಬಗೆಯ ಆಟಿಯ ಖಾಧ್ಯಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು. ಖಾಧ್ಯವನ್ನು ಸವಿದ ಗಣ್ಯರು ಮೆಚ್ಚುಗೆ ಸೂಚಿಸಿದರು.
ಪಡುಕುಡೂರಿನ ಪ್ರಮುಖರಾದ ಪಡುಪರ್ಕಳ ಶಂಕರ ಶೆಟ್ಟಿ, ಹರೀಶ್ ಶೆಟ್ಟಿ ಪಡುಪರ್ಕಳ, ಶಶಿಕಲಾ ಶೆಟ್ಟಿ ಪಡುಪರ್ಕಳ, ಯೋಜನೆಯ ಹೆಬ್ರಿ ತಾಲ್ಲೂಕು ಯೋಜನಾಧಿಕಾರಿ ರೇಷ್ಮಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಚಂದ್ರಾವತಿ, ಒಕ್ಕೂಟದ ಅಧ್ಯಕ್ಷ ಹೃದಯ ಕುಮಾರ್ ಶೆಟ್ಟಿ, ಸೇವಾ ಪ್ರತಿನಿಧಿ ಚಿತ್ರಾ ಪೂಜಾರಿ, ಯೋಜನೆಯ ವಿವಿಧ ಅಧಿಕಾರಿಗಳು, ಪ್ರಸನ್ನ ಶೆಟ್ಟಿ ಪಡುಕುಡೂರು,
ಶಂಕರ ಶೆಟ್ಟಿ ಮಾವಿನಕಟ್ಟೆ, ಶ್ರೀನಿವಾಸ ಆಚಾರ್ಯ ಪಡುಕುಡೂರು, ಶ್ರೀ ಭದ್ರಕಾಳಿ ಜ್ಞಾನವಿಕಾಸ ಕೇಂದ್ರದ ಪದಾಧಿಕಾರಿಗಳು, ಸದಸ್ಯರು ಭಾಗ ವಹಿಸಿದ್ದರು.



